Privacy Policy!

ಎಲ್ಲರೂ ತಮಗೆ ಬೇಕಾದ ಹಾಗೆ ಈ ವರ್ಷಕ್ಕೆ ಗೋಲುಗಳನ್ನು ಸೆಟ್ ಮಾಡಿಕೊಂಡು, 2021 ರ ಬಸ್ ಅನ್ನೋ, ಕಾರ್ ಅನ್ನೋ ಅಥವಾ ತುಂಬಾ ಆರೋಗ್ಯ ಹಾಗೂ ಪರಿಸರದ ಕಾಳಜಿ ಉಳ್ಳವರು ಸೈಕಲ್ ಅನ್ನೋ ಹತ್ತಿ ಪ್ರಯಾಣ ಈಗಷ್ಟೇ ಆರಂಭಿಸುತ್ತಾರೆ. ಮಾಧ್ಯಮಗಳ ಪ್ರಭಾವದಿಂದ ಇರಬೇಕು ಫಿಟ್ನೆಸ್ ಗೋಲ್, financial ಗೋಲ್, relationship ಗೋಲ್ ಹೀಗೆ ಹತ್ತಾರು ಬಗೆಯ ಗೋಲ್ ಸೆಟ್ ಮಾಡುವುದು ಎಲ್ಲರಿಗೂ ಅಭ್ಯಾಸ ವಾಗಿದೆ. ಕೆಲವು ದಿನ ಅಥವಾ ತಿಂಗಳು ಕಾಲ ಈ ಗೋಲುಗಳನ್ನುತಲೆಯಲ್ಲಿ ಇಟ್ಟುಕೊಂಡು ಮೊಬೈಲ್ ನಲ್ಲಿ ಅದಕ್ಕೆ ಬೇಕಾದ ಆಪ್ ಹಾಕಿಕೊಂಡು, ಮೆಮೊರಿ ಫುಲ್ ಆದಾಗ ಮೊಬೈಲ್ ನಿಂದ ಓಡಿಸಿ, ವರ್ಷ ಅಂತ್ಯದ ಒಳಗೆ ತಲೆಯಿಂದ ಝಾಡಿಸಿ ಫುಟ್ಬಾಲ್ ಪ್ಲೇಯರ್ ನಂತೆ ಒದೆಯುವುದು ನಾವೆಲ್ಲ ಪಾಲಿಸಿ ಕೊಂಡು ಬಂದ ಸಂಪ್ರದಾಯವಾಗಿದೆ.ಈ ವರ್ಷ ಪ್ರೈವಸಿಯ ಬಗ್ಗೆ ಕಾಳಜಿ ಇರುವವರು ಯಾವ ಆ್ಯಪ್ ಅನ್ನು ನಂಬಬಾರದು ಅಂತ ಹೊಸತೊಂದು ಗೋಲ್ ಸೆಟ್ ಮಾಡಿಕೊಂಡಿರಬಹುದು. ಎಲ್ಲವು ಈ ವಾಟ್ಸಾಪ್ ಪ್ರೈವಸಿ ಆವಾಂತರದಿಂದ. ಎಷ್ಟೆಂದರೂ ಪ್ರೈವಸಿಗೆ ತುಂಬಾ ಮಹತ್ವ ಕೊಟ್ಟು ಬೇರೆ ಬೇರೆ ಮನೆ, ಮನೆಯಲ್ಲಿ ಬೇರೆ ಬೇರೆ ಕೋಣೆ ಮಾಡಿಕೊಂಡವರು ನಾವು. ಈಗ ಇದ್ದ ಬಿದ್ದ ಎಲ್ಲ ಮಾಹಿತಿ ಮೊಬೈಲ್ ನಲ್ಲಿ save ಮಾಡಿ ಅದನ್ನು ಯಾರ್ಯಾರೋ ಬೇಕಾದ ಹಾಗೆ ಉಪಯೋಗ ಮಾಡಿಕೊಳ್ಳಲು ಸುಮ್ಮನೆ ಬಿಡುವವರು ನಾವಲ್ಲ.ವಿಷಯ ತಿಳಿದ ಕ್ಷಣ WhatsApp ಫ್ಯಾಮಿಲಿ ಗ್ರೂಪ್ ನಲ್ಲೇ ಒಂದು offline emergency meeting ಕರೆಯಲಾಯಿತು. ಇನ್ನು ಮುಂದೆ ಕೇವಲ ಹರಟೆ ಮಾತ್ರ WhatsApp ಗ್ರೂಪ್ ನಲ್ಲಿ ನಡೆಸ ತಕ್ಕದ್ದು. ಟಾಪ್ ಸೀಕ್ರೆಟ್ ವಿಷಯಗಳನ್ನು ಸಿಗ್ನಲ್ ನಲ್ಲೋ ಟೆಲಿಗ್ರಾಂ ನಲ್ಲೊ ಮಾತ್ರ ಚರ್ಚಿಸಬೇಕು ಎಂದು ನಿರ್ಧಾರ ವಾಯಿತು. ಅಡುಗೆ ಮನೆಯಲ್ಲಿ ಅಕ್ಕಿ ನೆನೆಸಿ ನಾಳೆ ದೋಸೆ ಚೆನ್ನಾಗಿ ಎದ್ದು ಬಂದರೆ ಸಾಕಪ್ಪಾ ಅಂತ ಮನಸಿನಲ್ಲಿ ಎಣಿಸುತ್ತಾ ಫೇಸ್ಬುಕ್ login ಆಗುವ ನಂಗೆ ‘how to make crispy dosa recipe’ ಎನ್ನುವ suggestion ನೋಡಿ ನನ್ನನ್ನು ಗೂಗಲ್, ಫೇಸ್ಬುಕ್ ನವರು ಯಾರಾದರೂ ಸೀಕ್ರೆಟ್ ಆಗಿ ಗಮನಿಸುತ್ತಿದ್ದಾರೋ ಅಂತ ಸಂದೇಹ ಉಂಟಾಗುತ್ತಿತ್ತು. ಈಗ ಈ meeting ನಂತರ ಮೊಬೈಲ್ ಓಪನ್ ಮಾಡಿದ ಕೂಡಲೇ ‘download signal app for better security’ ಅಂತ ad ನೋಡಿ ಅಷ್ಟೊಂದು ದಿಗಿಲಾಗಲಿಲ್ಲ.ಎಲ್ಲರೂ ಪ್ರೈವಸಿ law, ಟೆಕ್ನಾಲಜಿಯ ಬಗ್ಗೆ ತಲೆ ಕೆಡಿಸಿ ಕೊಂಡಿರುವಾಗ ಸರೋಜಮ್ಮನವರದ್ದು ಬೇರೆಯೇ ತಲೆ ಬಿಸಿ. ಈ software, ಆ್ಯಪ್ ಬಗ್ಗೆ ಏನೂ ತಿಳಿಯದೇ ಇದ್ದರೂ ಮಕ್ಕಳು ಹೇಳಿದರು ಅಂತ ಕಲಿತು WhatsApp ಅನ್ನು ತಕ್ಕ ಮಟ್ಟಿಗೆ ಉಪಯೋಗಿಸು ತ್ತಿದರು. ಕೋರೋನ ಟೈಂ ಅಲ್ಲಿ ತಮ್ಮದೇ ಹರಟೆ ಗ್ರೂಪ್ ಮಾಡಿಕೊಂಡು ಅಲ್ಲೇ ಕಾಲ ಕಳೆಯುತ್ತಿದ್ದರು. ಆದರೆ ಗ್ರೂಪ್ ನಲ್ಲಿ ಚೆನ್ನಾಗಿ ಮಾತಾಡಿ , ಬೇರೆಯೇ individual ಚಾಟ್ ನಲ್ಲಿ ವನಜಮ್ಮನ ಬಗ್ಗೆ ಗಿರಿಜಮ್ಮ ನವರಲ್ಲಿ ಬೇಕಾ ಬಿಟ್ಟಿಯಾಗಿ ದೂರುತಿದ್ದರು. ಈಗತಾನೆ ಫೇಸ್ಬುಕ್ ನಲ್ಲಿ ಕೆಲ್ಸಕ್ಕೆ ಸೇರಿಕೊಂಡಿರೋ ವನಜಮ್ಮನ ಮಗನಿಗೆನಾದರೂ ಇದೆಲ್ಲ ನೋಡಲಿಕ್ಕೆ ಸಿಗುತ್ತದೋ ಎನ್ನುವುದೇ ಚಿಂತೆಯಲ್ಲಿ ಸೊರಗಲು ಪ್ರಾರಂಭಿಸಿದ್ದಾರೆ ಸರೋಜಮ್ಮ. ಮಕ್ಕಳ ಹತ್ತಿರ ಈ privacy policy ಬಗ್ಗೆ ಬಗೆ ಬಗೆಯಾಗಿ ವಿಚಾರಿಸಿ ಕೊನೆಗೆ ಅವರು ರೇಗಿ, ಬೇಕಾದರೆ ಮೊದಲಿಗೆ account create ಮಾಡುವಾಗ ಅವಸರದಲ್ಲಿ I accept ಅಂದ ಪ್ರೈವಸಿ ಪಾಲಿಸಿ ಅನ್ನು ಓದು ಎಂದಿದ್ದಾರೆ. ಇವರು ಒಂದಕ್ಷರ ಅರ್ಥವಾಗದಿದ್ದರೂ ಚೂರು ಬಿಡದೆ ಓದಿ ಮುಗಿಸಿದ್ದಾರೆ.ಸರೋಜಮ್ಮ ನವರ ಪರಿಸ್ಥಿತಿ ತಮಾಷೆಯಾಗಿ ಕಂಡರೂ ದಿನ ನಿತ್ಯದ ಜೀವನದಲ್ಲಿ ಟೆಕ್ನಾಲಜಿ ಹಾಗೂ ವಿಧ ವಿಧದ ಆ್ಯಪ್ ಗಳಿಗೆ ದಾಸರಾಗಿರುವ ನಾವು ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಅನ್ನುವುದು ಸುಳ್ಳಲ್ಲ!

ಕೊರೊನಾಯಣ

ಏನು ನಿಮ್ಮ ಕಡೆಯಿಂದ ಒಂದೂ article ಬಂದಿಲ್ಲವಲ್ಲ ಎನ್ನುವವರಿಗೆಲ್ಲ ಟೈಂ ಇಲ್ಲ ಎನ್ನುವ ಸ್ಟ್ಯಾಂಡರ್ಡ್ ಉತ್ತರ ಕೊಡುತ್ತಿದ್ದೆ. ಈಗ ಟೈಂಮೊ ಟೈಂ ಇರುವಾಗಲೂ ಬರಿಯದಿದ್ದರೆ ದೇವರಲ್ಲದೆ ಆ ಕೊರೊನ ಕೂಡ ಮೆಚ್ಚಲ್ಲ.

ಡಾಕ್ಟರ್, ಪೊಲೀಸ್, ಅಗತ್ಯ ವಸ್ತುಗಳನ್ನು ಪೂರೈಸುವವರು ಎಲ್ಲರೂ ತಮ್ಮ ಶಕ್ತಿ ಮೀರಿ ಸಮಾಜಕ್ಕಾಗಿ ತಮ್ಮ ಕೈಲಾದದನ್ನು ಮಾಡುತ್ತಿರಬೇಕಾದರೆ ನಮ್ಮ ಐಟಿ ಬಿಟಿ ಯವರು ಮುಚ್ಕೊಂಡು ಮನೆಯಲ್ಲಿ ಕೂತು ಸಹಕರಿಸುತ್ತಿದ್ದಾರೆ.

ಮನೆಯಲ್ಲಿ ಕೂರುವುದು ಎಂದರೆ ಸುಮ್ಮನೆ ಕೂರದೆ ಮನೆಯವರೆಲ್ಲ production issue ನ status ಬಗ್ಗೆ ತಲೆಕೆಡಿಸಿ ಕೊಳ್ಳುವಂತಾಗಿದೆ. ತಲೆ ಕೆಡಿಸಿಕೊಳ್ಳಲು ಬೇರೆ ಏನೂ ನಡೀತಿಲ್ಲವಲ್ಲ ಈಗ. ಸಭೆ ಸಮಾರಂಭಗಳು ರದ್ದಾಗಿ ಯಾವ ವರ್ಕೌಟ್ ಪ್ಲಾನು ಇಲ್ಲದೆ ನ್ಯೂಸ್ ಪೇಪರ್ ತೆಳ್ಳಗಾಗಿದೆ. ಕಡೆ ಪಕ್ಷ ವಿದೇಶಕ್ಕೆ ಹೋಗುವಾಗ ಶುಭಾಶಯ ಕೋರಿಸಿಕೊಂಡ ಕೆಲವರು ಈಗ ವಾಪಸ್ ಬಂದು ಸುದ್ದಿ ನ್ಯೂಸ್ ಪೇಪರ್ ಗೆ ಬಿಡಿ ಯಾರಿಗೂ ತಿಳಿಸದೆ ನಾವೆಲ್ಲೂ ಹೊಗೇ ಇಲ್ಲ ಅನ್ನೋ ಥರ ವರ್ತಿಸುತಿದ್ದಾರೆ.

ದಿನಾ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಮೊಮ್ಮಗಳು headset ತಲೆಗೆ ಏರಿಸಿ ಹಲ್ಲುಜ್ಜದಿದ್ದರೂ hi hello ಎಂದು ಹಲ್ಲು ಕಿಸಿತಿರುದನ್ನು ಕಂಡು ಅಜ್ಜಿ ಇದೇನು ಸಮಾಚಾರ ಎಂದರೆ ಅದಾ sprint ಮೀಟಿಂಗು. ನಿನ್ನೆ ಎನ್ ಮಾಡಿದೆವು ಇವತ್ತು ಎನ್ ಮಾಡುವುದು ಅಂತ discuss ಮಾಡುದು ಅಂದಳು. ಕೂಡಲೇ ಅಜ್ಜಿ ಬಿಡು ಗೊತ್ತಾಯ್ತು ನಾವು ಮುಂಚೆ ನೀರು ತರುವ ನೆಪದಲ್ಲಿ ಬಾವಿಕಟ್ಟೆ ಹತ್ತಿರ ಸೇರಿ ಮಾಡ್ತಿದದನ್ನೇ sprintu ಅಂತಿರಲ್ಲೇ ಅಂದಾಗ ಮೊಮ್ಮಗಳು agilu ಬಾವಿ ಕಟ್ಟೆಯಲ್ಲಿ ಜನ್ಮ ತಳೆಯಿತೋ ಅಂತ ತಲೆ ಕೆರೆದುಕೊಂಡಳು.

ಇನ್ನು ಶಾಲೆ ಬೇಗ ಮುಚ್ಚಿದರಿಂದ ಟ್ಯಾಲೆಂಟ್ಸ್ ಡೇ ಅಂತ ದಿನ ಇಡೀ ಪ್ರಾಕ್ಟಿಸ್ ಮಾಡಿದ ಡಾನ್ಸ್ ಅನ್ನು ಪ್ರದರ್ಶಿಸಲಾಗದೆ ಮಕ್ಕಳೆಲ್ಲ video conference call ಗಳ background ಅಲ್ಲಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಎಲ್ಲ ಹೋಟೆಲ್ಗಳು ಮುಚ್ಚಿದರಿಂದ ಈ ವರೆಗೆ ಅಡುಗೆ ಮನೆ ಕಡೆ ಮುಖ ಮಾಡದ ಟೆಕ್ಕಿಗಳು ಅಮ್ಮನಿಗೆ ಫೋನ್ ಮಾಡಿ ಮಸಾಲೆಗಳ ಬಗ್ಗೆ ತಿಳ್ಕೊಂಡು ಅವರದ್ದೇ ರೀತಿಯಲ್ಲಿ ನೆನಪಿಟ್ಟುಕೊಳ್ತಿದರೆ. ಕಾಯಿ ತುರಿ, ಹುಣಸೆ ಹುಳಿ, ಕೆಂಪು ಮೆಣಸನ್ನು base class ಎಂದೂ ಮತ್ತೆ ಅದಕ್ಕೆ ಕೊತ್ತಂಬರಿಯೋ, ಗರಂ ಮಸಾಲೆಯೊ ಮತ್ತೊಂದೋ ಸೇರಿಸಿದರೆ derived class ಎಂದೂ ತಮ್ಮದೇ ರೀತಿಯಲ್ಲಿ recipe ಗಳನ್ನು document ಮಾಡಿಕೊಳ್ಳುತ್ತಿದ್ದಾರೆ.

ಒಂದು ರೀತಿಯಲ್ಲಿ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗಗಳಂತಾಗಿರುವ ಸಾಫ್ಟ್ವೇರ್ ಗಳು Ac ಕೋಣೆಯಲ್ಲಿ ಟಿಪ್ ಟಾಪ್ ಡ್ರೆಸ್ ಹಾಕಿಕೊಂಡು ಮಾತ್ರವಲ್ಲ ಮನೆ ಹಾಲ್ ನಲ್ಲಿ ಲಟಲಟ ಶಬ್ದ ಮಾಡುವ ಫ್ಯಾನ್ ಅಡಿ ಹಳೆ ಬಟ್ಟೆಯಲ್ಲೂ develop ಆಗಬಲ್ಲದು ಅಂತ ಕೊರೊನ ಸುಮ್ಮನೆ ತೋರಿಸಿ ಕೊಟ್ಟಿದೆ.

#covid19

Pandemic

During this time of pandemic COVID-19, it is necessary to stay at home and take care of our health. But it is also our responsibility to take care of few more things which are important at this time-

1. Use the internet responsibly. There are a lot of people working from home and using the same network. Please do not stream videos and series during working hours which may slow down the internet for someone who is working on something important.

2. It is good to know how everyone is taking self care and following the orders of govt. But uploading videos of same in whatsapp/social media will affect everyones internet speed.

3. It is good to clean everything and wash hands frequently. But dont waste water. Remember we have faced lots of water crisis in the past. Save water.

4. Electricity is one of the important thing today – for us and also for all the hospitals who are treating the COVID-19 patients. Use it wisely.

5. Everybody is at home. Do not cook a lot of stuff and overeat. The grocery supply might be affected in a few days. So spend responsibly. Also eating a lot during this quarantine may affect health and we all know going to hospital is not advisible now.

6. Think positive, exercise and do all the stuff which was not possible during the busy schedule – be it yoga, music, cooking etc. Also use this time to teach some necessary skills to the kids as they have got holidays and there are no summer camps happening.

7. Help each other

#covid-19 #pandemic

ಆಪ್ನ ಟೈಂ ಆಯೆಗ

ಅಂಗಡಿಗೆ ಹೋಗಿ ಅರ್ಧ ಕೆಜಿ ನೀರುಳ್ಳಿ ಕೊಡಿ ಎಂದದ್ದೇ ತಡ ಪಕ್ಕದಲ್ಲಿ ನಿಂತ ಮಹಿಳೆ ನಾನೇನೂ ಕೇಳಬಾರದ್ದನ್ನು ಕೇಳಿದೇನೂ ಎನ್ನುವಂತೆ ಅಡಿಯಿಂದ ಮುಡಿವರೆಗೆ ನನ್ನನ್ನೇ ದುರುಗುಟ್ಟಿ ನೋಡಿದರು😳. ನಾನು ಸಹ ಕಳ್ಳತನ ಮಾಡುತ್ತಿಲ್ಲ, tax tds ಎಲ್ಲ ಕಟ್ಟಿ ಉಳಿದ ದುಡ್ಡಲ್ಲಿ ಕೊಳ್ಳುತ್ತಿದೆನೆ ಎಂಬಂತೆ ಅವರನ್ನು ನೋಡಿದೆ. ಸ್ವಲ್ಪ ದೂರ ನಿಂತ uncle ಒಬ್ಬರು ಈಕೆಯ ಪಾನ್ ಕಾರ್ಡ್ , ಆಧಾರ್ ಕಾರ್ಡ್ ತೆಗೆದುಕೊಳ್ಳುದು ಉತ್ತಮ ಎಂಬಂತೆ ಅಂಗಡಿಯವನಿಗೆ ಕಣ್ಣು ಸನ್ನೆಯಲ್ಲೇ ಎಚ್ಚರಿಸಿದ. ಇಷ್ಟೆಲ್ಲ ಆಗುತ್ತಿರಬೇಕಾದರೆ ಅಂಗಡಿಯ ಹೊರಗಡೆ ಬಿದ್ದುಕೊಂಡಿರುತ್ತಿದ್ದ ನೀರುಳ್ಳಿ ಗೋಣಿ ಎಲ್ಲಿದೆ ಎಂದು ನನ್ನ ಕಣ್ಣುಗಳು ಹುಡುಕುತಿದ್ದವು. ಸಾಮಾನು ಕಟ್ಟುವ ಹುಡುಗ ನೇರ ಅಂಗಡಿ ಮಾಲೀಕನ ಗಲ್ಲೆಯ ಬಳಿ ಹೋದಾಗಲೇ ನೀರುಳ್ಳಿಯ ಬದಲಾದ ಸ್ಥಾನಮಾನದ ಅರಿವಾಯಿತು. ಮಾಲೀಕನ ಕುರ್ಚಿಯ ಪಕ್ಕ ಇಟ್ಟ ಗೋಣಿಯ ಮೇಲೆ ‘ಆಪ್ನ ಟೈಮ್ ಆಯೆಗ’ ಎಂದು ಬರೆದ ಹಾಗೆ ಕಾಣಿಸಿತು ಒಂದು ಕ್ಷಣಕ್ಕೆ ನನಗೆ.

ಕೊನೆಗೂ ಕಷ್ಟಪಟ್ಟು ನೀರುಳ್ಳಿಯನ್ನು ಕೊಂಡು ನಾನೇ ಮನೆಯಿಂದ ತಂದ ಪ್ಲಾಸ್ಟಿಕ್ ಚೀಲದಲ್ಲಿ ಭದ್ರವಾಗಿ ಇಟ್ಟುಕೊಂಡು ಹೋಗುತ್ತಿರಬೇಕಾದರೆ ಅಕ್ಕಪಕ್ಕ ರಸ್ತೆಯಲ್ಲಿ ಜನರ ಕಣ್ಣುಗಳು ನನ್ನ ಚೀಲದ ಮೇಲೆಯೇ ನೆಟ್ಟಿದ್ದ ಹಾಗೆ ಭಾಸವಾಯಿತು. ಅವರ ದೃಷ್ಟಿ ತಾಗಿಯೋ ಏನೋ ಅಷ್ಟು ದುಡ್ಡು ಕೊಟ್ಟರು ಮನೆಗೆ ಹೋಗಿ ನೋಡಿದರೆ ನೀರುಳ್ಳಿ ನಿಸ್ತೇಜವಾಗಿದ್ದಂತೆ ಕಂಡಿತು.

ರುಚಿಗೆ ತಕ್ಕಷ್ಟು ಉಪ್ಪಿನಂತೆ, ಪರಿಮಳಕ್ಕೆ ತಕ್ಕಷ್ಟು ನೀರುಳ್ಳಿಯನ್ನು ಬಹಳ ಜಾಗ್ರತೆಯಿಂದ ಹೆಚ್ಚುತ್ತಿರಬೇಕಾದರೆ ಈ ಹಿಂದೆ ಅಳತೆ ಮೀರಿ ಯದ್ವಾತದ್ವಾ ತುಂಡು ಮಾಡಿ ಅಡುಗೆ ಪಾತ್ರೆಗೆ ನಾನು ಬಿಸಾಡಿದ ನೀರುಳ್ಳಿಯ ನೆನಪಾಗಿ ಕಣ್ಣಲ್ಲಿ ಸ್ವಲ್ಪ ನೀರು ಬಂದಿತು(charlie chaplin ಹೇಳಿದಂತೆ ದುಃಖದ ಕಣ್ಣೀರನ್ನು ಮರೆಮಾಚಲು ಮಳೆಗೆ ನೆನೆಯಲು ಶೀತ ಜ್ವರದ ಬಾಧೆ ಇದ್ದವರು ಈ ವಿಧಾನ ಅನುಸರಿಸಬಹುದು. ದುಃಖ ನಿವಾರಣೆಯೊಂದಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡಿದ ಪುಣ್ಯ ಲಭಿಸುವುದು ಖಂಡಿತ)

ಹೀಗೆ ನೀರುಳ್ಳಿ ಹಾಕಿ ಮಾಡಿದ ಅಡುಗೆ ಸವಿದ ಮನೆಯವರು ಖುಷಿಯಾಗಿ ಏನು ಬೇಕೋ ಕೇಳಿಕೋ ಎಂದರು. ನಾನು ಬಹಳ ಸಮಯದಿಂದ ಕೇಳಬೇಕೆಂದಿದ್ದ ಕಿವಿ ಓಲೆಯ ನೆನಪಾದರೂ, ಹೊಟ್ಟೆಗೆ ನೀರುಳ್ಳಿ ಸಿಗುವುದೇ ಕಷ್ಟವಾಗಿರುವ ಕಾಲದಲ್ಲಿ ಕಿವಿಗೆ ಓಲೆ ಬೇಕೇ ಎಂದು ನಕ್ಕು ಸುಮ್ಮನಾದೆ😂

ಬದಲಾವಣೆ

‘Selifie’ ಎನ್ನುವ ಪದದ ಹುಟ್ಟಿನಿಂದ ಈವರೆಗಿನ ಬೆಳವಣಿಗೆಯನ್ನು ನೋಡುತ್ತಾ ಬಂದಿರುವ ನಾನು ಮೊದಲಿಗೆ ಈ ಪದ ಬಳಕೆಯಲ್ಲಿ ಬಂದಾಗ ಇದು self assesment, self review (ಆತ್ಮಾಭಿಲೋಕನ, ಸ್ವವಿಮರ್ಶೆ) ನಂತೆ ಮನುಷ್ಯನ ಅಂತರಂಗಕ್ಕೆ ಸಂಬಂದಿಸಿದ ಏನೋ ಪದ ಇರಬಹುದು ಎನ್ನುವ ಕಲ್ಪನೆಯವಳಾಗಿದ್ದೆ. ಯಾವಾಗ ಇದನ್ನು ಯರ್ರಾ ಬಿರ್ರಿಯಾಗಿ ಪ್ರತಿಯೊಬ್ಬರು ಉಪಯೋಗಿಸಲು ಪ್ರಾರಂಭಿಸಿದರೊ ಅವಾಗ ಅನಿವಾರ್ಯವಾಗಿ ಗೂಗಲಿಸಿ ಇದರ ನಿಜ ಅರ್ಥ ತಿಳಿದುಕೊಂಡೆ.

ಮೊಬೈಲ್ ಖರೀದಿಸುವಾಗ ಸೆಲ್ಫಿ ಕ್ಯಾಮೆರಾ ಒಳ್ಳೆಯದಿರುವುದನ್ನೇ ಖರೀದಿಸಿದರೂ ನಂತರ ಯಾವ್ಯಾವುದೋ (perfect ಸೆಲ್ಫಿ ತೆಗಿಯುವ ಕಲೆ ಸಿದ್ದುಸಿಕೊಳ್ಳಲಾಗದೆ) ಕಾರಣಕ್ಕೆ ಹೆಚ್ಚು ಉಪಯೋಗಿಸದೆ ಅದೆಲ್ಲ ನಮಗೆ ಹೇಳಿಸಿದಲ್ಲ ಬಿಡಿ ಅನ್ನುವವಳು ನಾನು. ಹೀಗೆ ಲೇಟೆಸ್ಟ್ ಟ್ರೆಂಡ್ ನೊಂದಿಗೆ ಹಾಗೋ ಹೀಗೊ ಸುಧಾರಿಸಿಕೊಂಡು ಮುಂದುವರಿಯುತ್ತಿರುವಾಗ ಮೊನ್ನೆ contacts ನಲ್ಲಿ ಇದ್ದ(?) ಒಬ್ಬರು ನಿಮಿಷಕ್ಕೊಂದರಂತೆ ಸೆಲ್ಫಿ ಕ್ಲಿಕ್ಕಿಸಿ status upload ಮಾಡುತ್ತಿರಬೇಕಾದರೆ ಯಾಕಿರಬಹುದು ಎನ್ನುವ ಕುತೂಹಲದಿಂದ ‘hi’ ಎಂದು ಒಂದು message ಅವರ inbox ಗೆ ಹಾಯಿಸಿದೆ. ಯಾಕ್ರೀ ಈ ಥರ ಸೆಲ್ಫಿ upload ಮಾಡಿ ಹಿಂಸೆ ಕೊಡುತ್ತಿದಿರಿ ಎನ್ನುವುದನ್ನು ಅವರ ಮನ ನೋಯಿಸದ ರೀತಿಯಲ್ಲಿ ಕೇಳಲು, ಆಚೆ ಕಡೆಯಿಂದ ‘ma lyf ma rulzzz’ ಎನ್ನುವ ಏನೋ ಅಸಂಭದ್ದ ಬಂದು ನನ್ನ inbox ಗೆ ಅಪ್ಪಳಿಸಿತು. ಇದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿ ಅನಕ್ಷರಸ್ಥಳಂತೆ ಒಂದು ಹೆಬ್ಬೆಟ್ಟು(👍) ಒತ್ತಿ ಸುಮ್ಮನಾದೆ.

ಇದಾದಮೇಲೆ ಲೇಟೆಸ್ಟ್ ಟ್ರೆಂಡ್ ಬಗ್ಗೆ ಮಾತಾಡುವಾಗ ನನ್ನ ಎಚ್ಚರಿಕೆಯಲ್ಲಿ ನಾನಿರಬೇಕೆಂದು ನಿರ್ಧರಿಸಿದೆ. ಇನ್ನೊಂದು ದಿನ ಎಳೆಯ ಸ್ನೇಹಿತರೊಬ್ಬರಲ್ಲಿ(ಹದಿಹರೆಯದ ಮಕ್ಕಳನ್ನು ಸ್ನೇಹಿತರರಂತೆ ಕಾಣಬೇಕು ಎನ್ನುವ ಮಾತಿದೆ. Kindergarten ಗೇ graduation ಡೇ ಇರುವ ಈ ಕಾಲದಲ್ಲಿ ಎಲ್ಲರನ್ನು ಸ್ನೇಹಿತರಂತೆ ಪರಿಗಣಿಸುವುದರಲ್ಲಿ ತಪ್ಪೇನಿಲ್ಲ) ಲೇಟೆಸ್ಟ್ ಟ್ರೆಂಡ್ ನ ಸುದ್ದಿ ಬೇಡ ಎಂದು, ದೇವತೆಗಳು ಮನಸ್ಸಿನಲ್ಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಿದ್ದರು. ಯೋಗ ಧ್ಯಾನ ಮಾಡಿ ಅವರಲ್ಲಿ ಅಷ್ಟೆಲ್ಲ ಶಕ್ತಿ ಇದ್ದಿತ್ತು ಗೊತ್ತಾ ಎಂದು ನನ್ನ ಪುರಾಣಗಳ ಅಲ್ಪ ಸ್ವಲ್ಪ ಜ್ಞಾನ ಬಿಚ್ಚಿಡಲು ಪ್ರಾರಂಭಿಸಿದೆ. ನನ್ನ ಎಲ್ಲ ಪುರಾಣ ವನ್ನು ಕೇಳಿದ ನನ್ನ ಎಳೆಯ ಸ್ನೇಹಿತರು ದೇವತೆಗಳು ತಮ್ಮ ಉದ್ದನೆಯ ಕೂದಲು ಹಾಗೂ ದೊಡ್ಡ ಕಿರೀಟದ ಅಡಿ ಆ ಪಕ್ಕದ್ಮನೆ uncle ಉಪಯೋಗಿಸುವ bluetooth headset ಇಟ್ಟುಕೊಳ್ಳುತ್ತಿರಲಿಲ್ಲಎಂದು ಹೇಗೆ ಹೇಳುತ್ತೀರಿ ಅಂದು ಬಿಟ್ಟ! ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ವಿಚಾರಧಾರೆ ಇಂದ ಮುಂದೊಮ್ಮೆ ಪುರಣಗಳಿಗೂ ತಿದ್ದುಪಡಿ ತರಬೇಕಾಗಬಹುದೋ ಎಂದು ನಾನು ತಲೆ ಕೆರೆದುಕೊಂಡೆ. 🙆

ಓಟು

ತರಕಾರಿ ಹೆಚ್ಚ್ ತಿರಬೇಕಾದ್ರೆ ತಪ್ಪಿ ಗಾಯ ಆಗಿ ರಕ್ತ ಉಚ್ಕೊಂಡ್ ಬಂದು ತಲೆ ತಿರುಗಿ ಹುಚ್ಚು ಹಿಡಿದಂಗಾಗಿ ಅಯ್ಯೋ ದೇವರೇ ಎಲ್ಲಿದ್ದಿಯಪ್ಪ ಅಂದ್ರೆ ಅವನೇನು ಇಲ್ಲಿದಿನಪ್ಪ ಹೇಳಲಿಕ್ಕೆ election ಟೈಂ ಅಲ್ಲಿ ಕೆಳಗಿಳಿದು ಜನರ ಮದ್ಯ ಬರಲ್ಲ ಬಿಡಿ. ತದನಂತರ ಸ್ವಲ್ಪ ಸುಧಾರಿಸಿಕೊಂಡು ಡಾಕ್ಟರ್ ಕ್ಲಿನಿಕ್ ಗೆ ಹೊರಟರೆ ಗೇಟು ಬಳಿ ಇದ್ದ building ನ ಚೌಕಿದಾರ ಹೋ ಎನ್ ಮೇಡಮ್ ಎಲ್ಲಿಗ್ ಹೊರಟಿರಿ ಎಂದನು. ಡಾಕ್ಟರ್ ಬಳಿ ಎಂದಾಗ ಓಹ್ ನೀವೂ tiktok ಸಂತ್ರಸ್ತರೋ? ಎನ್ನಲು ಇಲ್ಲಪ್ಪ ನಾಳೆ ಓಟು ಹಾಕಿ ಇಂಕ್ ಮಾರ್ಕ್ ಹಾಕಿಸಿಕೊಳ್ಳಬೇಕಾದ ಬೆರಳಿಗೆ ಗಾಯ ಆಯ್ತು. ಓಟಿಗಿಂತ ಇಂಕ್ ಮಾರ್ಕ್ ಗೆ ಜಾಸ್ತಿ ಬೆಲೆ ಇದೆ. ಇಡೀ ದಿನ ರಜೆ ಇರುವುದರಿಂದ ಬೆಳಿಗ್ಗೆನೇ ಓಟು ಹಾಕಿ ರಾತ್ರಿ ವರೆಗೆ ಇಂಕ್ ಮಾರ್ಕ್ ತೋರಿಸಿ 10-50% off ಇರುವ ಎಲ್ಲ ಅಂಗಡಿಗೆ ಹೋಗುವ ಪ್ಲಾನ್ ನಲ್ಲಿದ್ದೆ. ಹಾಗಾಗಿ ಡಾಕ್ಟರ್ ಬಳಿ ತೋರಿಸಿ ಬರೋಣ ಅಂತ ಹೊರಟೆ ಅಂದೆ.

ನಗು ಹಾಗೂ ಮತದಾನಕ್ಕೆ ಜಾತಿ ಮತ ಪಕ್ಷ ಭೇದವಿಲ್ಲ. ಎಲ್ಲ ಪಕ್ಷ ಗಳ ಮತದಾನ ಪ್ರಚಾರದ ಕಚ್ಚಾಟ ಹುಚ್ಚಾಟ ಗಳನ್ನು ನೋಡಿ ಈವರೆಗೆ ನಕ್ಕಾಗಿದೆ ನಾಳೆ ಎಲ್ಲರೂ ತಪ್ಪದೆ ಮತದಾನ ಮಾಡಿ. Happy voting!

P.S- ಈ ಲೇಖನದಲ್ಲಿ ಬರುವ ಎಲ್ಲ ಡೈಲಾಗು ಗಳು ಕಾಲ್ಪನಿಕ😛 ನಿಜ ಜೀವನದೊಂದಿಗೆ ಸಾಮ್ಯತೆ ಕಂಡು ಬಂದರೆ ಸುಮ್ಮನೆ ನಕ್ಕು ಬಿಡಿ.

ಬಕಾಸುರ

ನಮ್ಮೂರಿನಲ್ಲಿ ಗಣೇಶ ಚತುರ್ಥಿಯಾಗಿ ಮೂರನೇ ದಿನಕ್ಕೆ ಸಾರ್ವಜನಿಕ ಗಣೇಶೋತ್ಸವದ ಗಣಪತಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸುತ್ತಾರೆ. ಚಿಕ್ಕವರಿದ್ದಾಗ ಇದೊಂದು ಬಹಳ ಸಂಭ್ರಮದ ದಿನವಾಗಿತ್ತು ನಮಗೆಲ್ಲ. ಈ ದಿನ ಶಾಲೆಗೆ ರಜೆ ಇಲ್ಲವಾದರೂ ಮೆರವಣಿಗೆ ಇರುವುದರಿಂದ ಬೇಗನೆ ಶಾಲೆಯಿಂದ ಮನೆಗೆ ಬರಬಹುದಾಗಿತ್ತು. ಆದರೂ ಸಾಲು ಸಾಲು ರಜೆಯ ನಂತರ ಇಂತಹ ಸಂಭ್ರಮದ ನಡುವೆ ಶಾಲೆಗೆ ಹೋಗಲು ನಾವೆಲ್ಲ ಸ್ವಾಭಾವಿಕವಾಗಿ ಹಿಂದೇಟು ಹಾಕುತ್ತ ಕಾರಣ ಹುಡುಕುತಿದ್ದೆವು.

ಹೀಗೆ ಈ ಗಣಪತಿ ವಿಸರ್ಜನೆಯ ದಿನ ಸುಮಾರು ಜನ ಬಗೆಬಗೆಯ ವೇಷ ಹಾಕಿ ಮನೆ ಮನೆಗೆ ಬರುತ್ತಿದ್ದರು. ಪೋಸ್ಟ್ ಮ್ಯಾನ್, ರಾಕ್ಷಸ, ಬಕಾಸುರ, ಹುಡುಗಿ, ಶಾಲೆಗೆ ಹೋಗುವ ಹುಡುಗ ಹೀಗೆ ಬೇರೆ ಬೇರೆ ವೇಷಧಾರಿಗಳು ಆ ದಿನವಿಡೀ ತಿರುಗಾಡುತ್ತ, ಎಲ್ಲರ ಹತ್ತಿರ ದುಡ್ಡು ಕೀಳುತ್ತ, ಮಕ್ಕಳನ್ನು ಕಂಡರೆ ಮೃದುವಾಗಿ ಗದರಿಸುತ್ತಿರುತಿದ್ದರು. ಒಂದು ಸಲ ನಾನು ಹೀಗೆ ಒಲ್ಲದ ಮನಸ್ಸಿನಿಂದ ಶಾಲೆಗೆ ಹೊರಟಿದ್ದಾಗ ಮನೆಯ ಓಣಿಯ ತಿರುವಿನಲ್ಲಿ ಧುತ್ತನೆ ಎದುರಾದ ಬಕಾಸುರ ನನ್ನನ್ನು ಕಂಡವನೆ ತನ್ನ talent ಪ್ರದರ್ಶಿಸಲು ‘ಹ್ಹ ಹ್ಹ ಹ್ಹ ಬಕಾಸುರಾ’ ಎಂದು ಗಟ್ಟಿ ಧ್ವನಿಯಲ್ಲಿ ಆರ್ಭಟಿಸಿದನು. ಮೊದಲೇ ಟಿವಿಯಲ್ಲಿ ರಾಕ್ಷಸರನ್ನು ಕಂಡು ಅವರ ಬಗ್ಗೆ ಅತಿಯಾಗಿ ಹೆದರಿಕೆ ಬೆಳೆಸಿಕೊಂಡಿದ್ದ ನನಗೆ, ಇವನು ತಿರುವಿನಲ್ಲಿ ಎದುರಾದದ್ದು ಮತ್ತಷ್ಟು ಹೆದರಿಕೆ ಹುಟ್ಟಿಸಿತು. ಒಂದೇ ಸವನೆ ಬೊಬ್ಬೆ ಹಾಕಿದ ನಾನು ಯು ಟೂರ್ನ್ ತೆಗೆದು ಮನೆಯತ್ತ ಕಾಲು ಕಿತ್ತೆ. ಇದರಿಂದ ಗಲಿಬಿಲಿಗೊಂಡ ಬಕಾಸುರ ತನ್ನ ಕತ್ತಿ ಎತ್ತಿಕೊಂಡು ನನ್ನನು ಸಮಾಧಾನ ಮಾಡಲು ನನ್ನ ಹಿಂದೆ ಓಡಿ ಬಂದದ್ದು ಹೇಗಿರಬಹುದೆಂದು ನೀವೇ ಊಹಿಸಿ!

ಈ ಘಟನೆ ನೆನಪಾದದ್ದು ಇವತ್ತು ಬೆಳಿಗ್ಗೆ ಮನೆಯ ಮುಂದೆ ಬಂದು ನಿಂತ ಬಕಾಸುರನನ್ನು ನೋಡಿ. ಕಾಲಕ್ಕೆ ತಕ್ಕ ಕೋಲ ಎನ್ನುವಂತೆ ಕೇವಲ ಬಕಾಸುರನ ಟಾಪ್ ಮಾತ್ರ ಹಾಕಿ ಬಂದವನನ್ನು ಕಂಡು ಓಹ್ ಇದೇನು ಮೊಡರ್ನ ಬಕಸುರನ ಎಂದು ಕೇಳಲು, ಹೌದು ಮೇಡಂ ಫ್ಯಾಷನೆಬಲ್ ಆಗಿದೆ ಅಲ್ವಾ? ಅಂದಾಗ ಮೆಲ್ಲಗೆ ನಕ್ಕು ಹೌದಪ್ಪ ಅಂದೆ.

ನನ್ನ ನಗುವಿನಿಂದ ಕೋಪ ಗೊಂಡವನಂತೆ ಕಂಡ ಮೊಡರ್ನ ಬಕಾಸುರ ‘ಎನ್ ಮೇಡಂ ಹಾಗೆ ನಗ್ತಿರ, ಇದೆಲ್ಲ ನೀರು ಕುಡಿದಷ್ಟು ಸುಲಭ ಅನ್ಕೊಂಡ್ರಾ? ಎಷ್ಟು ಸೆಖೆ ಉಂಟು ಗೊತ್ತುಂಟ? ಬೇಕಾದ ಹಾಗೆ ನದಿ ತಿರುಗಿಸಿ , ಮರ ಕಡಿದು ಪ್ರಕೃತಿ ನಾಶ ಮಾಡಿ ಮತ್ತೆ ಬೊಳ್ಳ(ನೆರೆ) ಬಂತು , ಸೆಖೆ ಜಾಸ್ತಿ ಅಂತೆಲ್ಲ ಅತ್ತರೆ ಎನ್ ಪ್ರಯೋಜನ?’ ಅಂತ ಪಟಪಟನೆ ಹೇಳಿ ಕೊನೆಗೆ ‘ಇನ್ನು ಮುಂದೆ ನೀರು ಕುಡಿದಷ್ಟು ಸುಲಭ ಅಂತ ಹೇಳಲಿಕ್ಕೆ ಸಹ ಉಂಟಾ ಇಲ್ವಾ’🤔 ಅಂತ ಒಂದು ಪಂಚ್ ಲೈನ್ ಸಹ ಬಿಟ್ಟನು.

ಮೊಡರ್ನ ಬಕಾಸುರ ಹೀಗೆ ಒಮ್ಮೆಲೇ ನನ್ನ ಮೇಲೆ ಮಾಡಿದ ಮಾತಿನ ಪ್ರಹಾರದಿಂದ ಬೆಚ್ಚಿಬಿದ್ದ ನಾನು ಇದೆಲ್ಲ ಎಲ್ಲಿಂದ ತಿಳಿದುಕೊಂಡಿರಿ ಅಣ್ಣ ಎಂದರೆ ‘ಅಯ್ಯೋ ಫೇಸ್ಬುಕ್ ವಾಟ್ಸಾಪ್ ಅಲ್ಲಿ ಬರ್ತಾ ಇರ್ತದಲ್ಲ ನೀವು ಓದುದಿಲ್ವಾ?’ ಅಂತ ನಂಗೆ ಕೇಳಿದನು. ಹಾಗಾದರೆ ನಮ್ಮ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾಹಿತಿ, ಎಚ್ಚರಿಕೆ ಎಲ್ಲರಿಗೆ ಇದೆ ಎಂದು ತಿಳಿದು, ಅಲ್ಲ ಇದರ ಬಗ್ಗೆ ನೀವು ಏನಾದರೂ ಕ್ರಮ ಕೈಗೊಂಡಿದ್ದಿರ ಅಂತ ಮರು ಪ್ರಶ್ನೆ ಎಸೆದೆ. ಅದಕ್ಕೆ ಬಕಾಸುರ ಹೌದು ನೆರೆ ಪೀಡಿತರಿಗೆ ನನ್ನ ಕೈಲಾದ ಸಹಾಯ ಮಾಡಿದೆ ಎಂದನು. ಅಲ್ಲಣ್ಣ ನೆರೆ ಬಂದ ಮೇಲೆ ಸಹಾಯ ಮಾಡುವುದಕ್ಕಿಂತ ನೆರೆ ಬರದ ಹಾಗೆ ಮಾಡುವುದು ಮುಖ್ಯ ಅಲ್ವಾ? ಹೀಗೆ ಮುಂದುವರಿದರೆ ಪ್ರತಿ ವರ್ಷ ಇದೆ ಕಥೆ ಅಲ್ವಾ? ಇದರ ಬಗ್ಗೆ ಏನು ಹೇಳುತ್ತಿರಿ ಅಂತ ಕೇಳಿದರೆ ಅವ ‘ಅಯ್ಯೋ ಅದೆಲ್ಲ ನನ್ನ ಒಬ್ಬನಿಂದ ಆಗುದ ಮೇಡಂ, ಅದನ್ನು ನೋಡಿಕೊಳ್ಳಲು ದೊಡ್ಡ ದೊಡ್ಡವರಿದ್ದಾರೆ ಬರ್ತೇನೆ ಮುಂದಿನ ವರ್ಷ!’ ಅನ್ನುತ್ತ ಸರಸರನೆ ಹೆಜ್ಜೆ ಹಾಕಿದ☺️

Days

There are few days when everything seems so right. Everything happens as we expect. We feel like we have complete control of our life. We feel we can change anything as per our wish.

Also there are days when nothing works as expected. Nothing is in favour of us. Everything seems so negative. We feel like nothing is in our control.

Also sometimes it is matter of few seconds. When everything seems impossible, one small positive thing gives us so much strength and confidence that we take everything positively and what was impossible before few seconds becomes a easy task for us .

We say it was a bad day or good day. It is not the day which will be good or bad. It is our mindset which makes things easy or difficult for us. Yes it is not easy to maintain a positive mindset always. But whenever we are feeling low or in a negative zone a small part of our brain should know this is not permanent. No one can be right always. Also no one can be wrong always. There is something positive in everyone. Some people identify and nurture it. Some fail to identify it. I always think if a complete negative person will have atleast slight realisation of their negativity?🤔

Helping hand

When we help someone we should do it from heart and without any expectations. Also when someone helps us we should have it in mind that it is a responsibility on us that someone has trusted on us and our ability. So after accomplishing our goal with that help we should always remember the good deeds of the person who helped us.

I always feel when we get something from someone in the form of help trying to return them the same is meaningless. Eg, someone gave 100rs when you needed it the most 10years back. Today you are a wealthy person and want to return it. It doesn’t make sense returning 100rs to that person today. The time at which the person helped and the situation at which he helped is very important compared to the money you receive. Similarly if someone feeds you when you are hungry feeding them back is not equal to the help they did to you.

Receiving help from someone is a responsibility which should motivate us to help someone else who is in need of it. When someone helps us they do it without any expectations. If we also do the same and help others world will definitely be a better place to live with lots of hope and positivity.

#thought #help #positivity